ಭಾನುವಾರ, ಅಕ್ಟೋಬರ್ 31, 2010

ನನ್ನ ಅನಾವರಣ....
                ಕವಿಗಳ ಎತ್ತರಕ್ಕೂ ಅಲ್ಲದ, ಸಾಮಾನ್ಯರ ಮಾತುಗಳ ಮಟ್ಟಕ್ಕೂ ಅಲ್ಲದ ವಿಶೇಷ ಕನ್ನಡ ನಮ್ಮದು.  ಇದೇ ಭಾಷೆಯನ್ನು ಭಾವನೆಗಳ  ಅಭಿವ್ಯಕ್ತಿಗೆ  ಬಳಸಿಕೊಂಡು ಅಡ್ಡ ಕಸುಬೀ ಕವಿಗಳಾಗಿ ರೂಪುಗೊಂಡಿರುವ ನನ್ನಂಥ ಎಲ್ಲ  ಬಂಧು ಬಾಂಧವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ದೊಡ್ಡ ಕವಿಗಳ ಎತ್ತರದ ಕನ್ನಡವನ್ನು ಓದಲು ಹೋಗಿ ಏನೂ ಅರ್ಥವಾಗದೆ ಕೊನೆಗೆ ಸಿನಿಮೀಯ ಸಾಹಿತ್ಯದ ಕನ್ನಡವನ್ನು ಮಹಾನ್ ಕನ್ನಡಿಗರಂತೆ ಆಸ್ವಾದಿಸುವ ನನ್ನೆಲ್ಲ ಮಿತ್ರರ ಗುಂಪಿಗೆ ನಾನೂ ಸೇರುತ್ತೇನೆ.


                    ನನ್ನ ಈ ಬರವಣಿಗೆ ನನ್ನ ಭಾವನಗಳನ್ನೂ, ನನ್ನ ಅರ್ಧಂಬರ್ಧ ಕವಿತ್ವವನ್ನೂ ಬಿಂಬಿಸುವ ಒಂದು ಸಣ್ಣ ಯತ್ನ. ಹೊಸಗನ್ನಡದ ಉಳಿವಿಗಾಗಿ ನನ್ನ ಪ್ರಾಮಾಣಿಕ ಪ್ರಯತ್ನ. ...